Thursday, January 24, 2008

ನಿರೀಕ್ಷೆ (ವಿಶ್ವನಾಥ ಬಡಿಗೇರ - ಜೂನ್ ೨೦೦೨)


ಮುಗಿಲ ಕಡೆ ಮುಖ ಮಾಡಿ ನಿಂತ
ಆತನಿಗೆ ಅನಿಸಿತ್ತು ಕಳಿಸುವುದು ದಿಗಂತ
ಒಂದಾದರೂ ಹೊಳೆಯೊ ನೀರಿನ ಮುತ್ತ
ಬೀಜ ಮೊಳೆತು, ಬೆಳೆದು ಕೊಡುವುದು ತುತ್ತ ll


ಮುಗಿಲ ಮೋಡದಿ ಜಾರಿದ ಆ ಹನಿ ಮುತ್ತು
ಪಾರ್ಥನ ಬ್ರಹ್ಮಾಸ್ತ್ರದ ರಭಸವ ಮೀರಿಸುವಂತಿತ್ತು
ಲೀಲಾಜಾಲವಾಗಿ ತೇಲುತ್ತ ಬರುತ್ತಲಿತ್ತು ಹೊತ್ತು ತುತ್ತು
ಶಿಲೆಯಾದ ಆತ ಭವಿಷ್ಯದ ನಿರೀಕ್ಷೆ ಹೋತ್ತು ll


ಬಾ ಓ ಮಳೆ ಹನಿಯೆ ಬಾ ಇತ್ತ
ಮುತ್ತ ಹನಿ ಕಾಣದೆ ಆಸೆ ಕಮರಿತ್ತ
ಬರಸಿಡಿಲು ಬಡಿದರೊ ನನ್ನ ದೃಷ್ಟಿ ನಿನ್ನತ್ತ
ಹೇಳುತ್ತಲಿತ್ತವನ ಮನ ದೊರೆಯಲಿದೆ ತುತ್ತ ll


ಬೀಜ-ನೀರ ಹನಿಯ ಸಮಾಗಮದ ಹೊತ್ತು
ಮರೆಸಿತ್ತವಗೆ ಜೀವನದೆಲ್ಲ ಆಪತ್ತು
ಎತ್ತಿಂದಲೋ ಬಂದ ಗಾಳಿ ಆ ಹನಿ ಮತ್ತೇತ್ತಲೋ ಹಾರಿಸಿತ್ತು
ಇದೇನಾ ವಿಧಿ ವಿಕೋಪದ ಕರಾಮತ್ತು ll


ಆತ ಆಸೆಹೊತ್ತು ಶಿಲೆಯಾಗಿ ಅತ್ತ
ಕಣ್ಣಹನಿ ಧಾರೆಯಲ್ಲೊ ಆಗದುಲಿಯಿತು ಬೀಜ ಭತ್ತ
ಶಿಲೆಯಾಗಿರುವನಾತ ಮುಖಮಾಡಿ ದಿಗಂತದತ್ತ
ಕಾಯುತ್ತಿರುವನಾತ ಮೋಡದಿ ಜಾರೋ ಹನಿಮುತ್ತ ll

ನಂದೂ ತಪ್ಪಿಲ್ಲಾರೀ... (ವಿಶ್ವನಾಥ ಬಡಿಗೇರ - ಜನೇವರಿ ೨೦೦೩)





ನವಿಲ ನಾಟ್ಯದಲಿ ಬಂದಳಾ ಕುವರಿ
ನಗುತ ಮಾತಾಡಿಸಿದಳೆ ಕೆನ್ನೆ ಸವರಿ
ಕೆನ್ನೆಗೆನೋ ಹತ್ತಿತ್ತು ಹೇಳೋದು ಮರೆತೆ ಸಾರಿ
ಮದುವೆಲಿ ಈ ರೀತಿ ಮಾತಾಡಿದ್ದು ಸರಿಯೇನ್ ಹೇಳರಿ ll


ಕಡೆಗೂ ಹೋದಳಲ್ಲ ಸುಂದರಿ ಅಂದದ್ದೆ ಸರಿ
ನಗುತ್ತ ಬಂದೆ ಬಿಟ್ಟಳಲ್ಲ ಭರತನಾರಿ
ಅವಳೊಂದಿಗೆ ಅವಳ ಗೆಳತಿಯರದೂ ಹಾಜರಿ
ಹೆದರಿದ ಹರಿಣಿಯಂತೆ ನೋಡದಂತೆ ನಿಂತದ್ದು ನಿಜಾರಿ ll


ಗೆಳತಿಯರಿಗೆಲ್ಲ ಪರಿಚಯ ಮಾದಿಸಿದಳಾ ನಾರಿ
ಗಗನಸಖಿಯಂತೆ ನಗುತ್ತಾ ವಿಶ್ ಮಾಡಿದೆ ಏಷ್ಟೋ ಸಾರಿ
ಮಂಟಪದ ಹಿಂದೆ ಬರಲು ಹೇಳಿ ನಡೆದಳು ಸುಕುಮಾರಿ
ಕೇಳಿ ಇಂಗು ತಿಂದ ಮಂಗನಂತಾಯ್ತು ನನ್ನ ಮಾರಿ ll


ಕಳ್ಳನಂತೆ ಹೆಜ್ಜೆ ಹಾಕುತ್ತ ಮಂಟಪದ ಹಿಂದೆ ಹೋದೆರಿ
ಹಾಡುತ್ತ ನಿಂತ ಅವಳ ಕೈಯಲ್ಲಿ ಗುಲಾಬ ಜಾಮುನರಿ
ತಾನರ್ಧ ತಿಂದು ನನಗರ್ಧ ತಿನಿಸಿದಳಾ ಕುವರಿ
ಜಾಮುನು ತುಂಬಾ ರುಚಿಯಾಗಿತ್ತ್ಯಾಕೋ ಭಗವಂತ ಬಲ್ಲಾರಿ ll


ಅಕ್ಷತೆ ಹಾಕುವಾಗ ನನ್ನ ಹತ್ತಿರ ನಿಂತಳು ಸುಂದರಿ
ಅವಳ ಗೆಳತಿಯರ ಅಕ್ಷತೆ ನಮ್ಮ ಮೇಲೆ ಸುರಿದವು ಮೂರು ಬಾರಿ
ನನಗೆ ತನ್ನ ಮೈ ಹಚ್ಚಿ ಅವಳು ನಿಂತಾಗ ಮಜಾರಿ
ಸಾವಿರ ವೋಲ್ಟ್ ಕರೆಂಟ್ ಹೊಡೆದದ್ದು ಮಾತ್ರ ಪೂರ್ತಿ ಸರಿ ll


ಯಾರಿಲ್ಲದ ರೂಮಲ್ಲಿ ಅವಳು ಮುತ್ತಿಟ್ಟಾಗ ತಬ್ಬಿಕೊಂಡೆರಿ
ಅರೆರೇ, ಮುತ್ತಿಟ್ಟರೆ ಗಲ್ಲ ಏಕೆ ತಂಪಾಯ್ತು ಅಂತ ಕಣ್ಣ ಬಿಟ್ಟೇರಿ
ನಾ ತಬ್ಬಿಕೊಂಡಿದ್ದೇನೋ ತಲೆದಿಂಬು ಅನ್ನೊದು ನಿಜಾರಿ
ಗಲ್ಲ ನೆಕ್ಕಿದ್ದು ಮಾತ್ರ ನನ್ನ ಪ್ರೀತಿಯ ಬೆಕ್ಕಿನ ಮರಿ ll